ನಗರ

ಮಂಗ
ನಗರ ನೋಡಲೆಂದು
ಮರದಿಂದಿಳಿದು ಬಂದ
ಪಾಪ!
ಆಕಾಶ ಚುಂಬಿ
ಆಹ ಏನೆಂಬಿ
ಸೌಧಗಳ ಕಂಡ
ಸೌಧಗಳ ನಡುವೆ ನಾಗರದಂತೆ
ಅಲ್ಲ ಅಜಗರದಂತೆ
ಬಿದ್ದ ಟಾರ್ ರೋಡುಗಳ
ಕಂಡ
ಟಾರ್ ರೋಡುಗಳ ಮೇಲೆ
ಏನು ಭಗವಂತನ ಲೀಲೆ
ಓಡಾಡುವ ಮೋಟಾರು ಆಮೆಗಳ ಕಂಡ
ಆಮೆಗಳ ಗರ್ಭದೊಳಗಿಂದ
ಕೆಳಗಿಳಿವೆ ಆಧುನಿಕ
ದೇವತೆಗಳ ಕಂಡ
ಪಾತಾಳ ನಾಟ್ಯ ಮಂದಿರದೊಳಕ್ಕೆ
ಇವರೊಂದಿಗಿಳಿದ
ಲಗಾ ಲಗಾ
ಏನು ಜಗಾ
ಆಹ ಏನಲ್ಲಿ
ಓಹೊ ಮಿಸ್ ಲಿಲ್ಲಿ
ಕುಣಿಸ್ತಿದಾಳೆ ಬೆಲ್ಲಿ
ವ್ಹಾರೆ ವ್ಹಾ
ಲ ಲ್ಲಾ ಲ ಲಾ
ಅರರೆ ಏನಿಲ್ಲಿ
ಓಹೋ ರೇ ಕ್ಯಾಬರೆ
ಸ್ಕರ್ಟ್ ಚೆಲ್ಲಿ
ಬ್ರಾ ಚೆಲ್ಲಿ
ಅರರೆ ಬ್ರಾ ಚೆಲ್ಲಿ
ಪರೆ ಕಳಚಿ
ಕದ ತೆರೆದು
ಆಹ ಸ್ವರ್ಗವೆ ತೆರೆದು
ಸ್ಟ್ರಿಪ್ ಟೀಸ್
ಪ್ಯಾರಡೈಸ್
ವಿ ಕೇಮ್ ಫ್ರಮ್ ಪ್ಯಾರಡೈಸ್
ವಿ ಗೋ ಟು ಪ್ಯಾರಡೈಸ್

ಮುಚ್ಚಿದ ಕಿವಿ ಕಣ್ಣು ಬಾಯಿ
ಹಾರಿದ ಕಿಷ್ಕಿಂಧೆಗೆ
ತಪಸ್ಸಿಗೆ ಕುಳಿತು
ಅಲ್ಲೇ ಆದ ಸಮಾಧಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದ್ರೌಪದಿ
Next post ಯಾವ ಹಾಡನು ನಾ ಹಾಡಲಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys